ಶೃಂಗೇರಿ,ಆ.13: ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಯ ಬೆನ್ನಲ್ಲೇ ಪಟ್ಟಣದಲ್ಲಿರುವ ಶಂಕರಾಚಾರ್ಯರ ಮೂರ್ತಿಯ ಮೇಲೆ ಕಿಡಿಗೇಡಿಗಳು ಮುಸ್ಲಿಂಯೊಂದರ ಸಂಘಟನೆಯ ಬಾವುಟ ಹಾರಿಸಿ ಕೋಮು ಸಾಮರಸ್ಯ ಕದಡಲು ಯತ್ನ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಮಂಗಳವಾರ ರಾತ್ರಿ ಸುಮಾರಿಗೆ ಶೃಂಗೇರಿ ಪಟ್ಟಣದ ಶಂಕರಾಚಾರ್ಯರ ವೃತ್ತದಲ್ಲಿರುವ ಶಂಕರಾಚಾರ್ಯರ ಪ್ರತಿಮೆ ಮೇಲೆ ಕಿಡಿಗೇಡಿಗಳು ಮುಸ್ಲಿಂ ಸಂಘಟನೆಯ ಬಾವುಟ ಹಾಕಿದ್ದಾರೆ. ಹಿಂದೇ ಇರದ ಈ ಸಂಘಟನೆಯ ಬಾವುಟ ಗುರುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ. ಶ್ರೀಮಠದ ಭಕ್ತರು, ಮಾಜಿ ಸಚಿವ ಜೀವರಾಜ್, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಕಿಡಿಗೇಡಿಗಳು ನಡೆಸಿದ ಈ ಕೃತ್ಯದ ವಿರುದ್ದ ಗರಂ ಆಗಿದ್ದು. ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶಂಕರಾಚಾರ್ಯರ ವೃತ್ತದ ಬಳಿ ಜಾಮಾಯಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಎಸ್.ಡಿ.ಪಿ.ಐ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಶೃಂಗೇರಿ ಭಾಗದಲ್ಲಿ ಕೋಮು ಸಾಮರಸ್ಯವನ್ನು ಹಾಳುಗೆಡವಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದ ಹೇಳಲಾಗಿದೆ. ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿದ್ದು. ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.
1 Comments
Disgraceful act, the culprits must be punished. Immediate action will instill a sense of discipline in the community. We have to act with restraint and not stoop to their level.
ReplyDeleteJai Hara Shankara