ಶೃಂಗೇರಿ: ಪಟ್ಟಣದ ಶ್ರೀ ಜೆ. ಸಿ. ಬಿ. ಎಂ ಕಾಲೇಜಿನಲ್ಲಿ 'ಅಂಕುರ' ಎಂಬ ಕಾಲೇಜು ವಿದ್ಯಾರ್ಥಿಗಳೇ ಬರೆದಿರುವ ಕವಿತೆಗಳ ಸಂಕಲನ ಪುಸ್ತಕವನ್ನು ಖ್ಯಾತ ಲೇಖಕಿ ಹಾಗೂ ಕವಯತ್ರಿ ಶ್ರೀಮತಿ ಸವಿತಾ ನಾಗಭೂಷಣ ಲೋಕಾರ್ಪಣೆ ಮಾಡಿದರು.
ಈ ಕವನ ಸಂಕಲನವನ್ನು ವಿದ್ಯಾರ್ಥಿಗಳೇ ಸಂಪಾಡಿಸಿರುವುದು ವಿಶೇಷ. ಕಾಲೇಜು ವಿದ್ಯಾರ್ಥಿಗಳ ಕಲಾ ಸಂಘದಿಂದ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಸ್ವಾಮಿ ವಹಿಸಿದ್ದರು, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯೆ ಪುಷ್ಪ ಲಕ್ಷ್ಮಿ ನಾರಾಯಣ್, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ. ಕೆ. ಪಿ ಪ್ರಕಾಶ್, ಕನ್ನಡ ವಿಭಾಗ ಮುಖ್ಯಸ್ಥೆ ರಶ್ಮಿ ಕೆ. ಆರ್, ಅಂಕುರ ಕೃತಿಯ ಸಂಪಾದಕರಾದ ಆಂಗ್ಲ ಉಪನ್ಯಾಸಕ ಶ್ರೀ ಲಕ್ಷ್ಮೀ ಕಿಶೋರ್ ಅರಸ್ ಹಾಗೂ ಕಲಾ ಸಂಘದ ಅಧ್ಯಕ್ಷ ಸಚಿನ್ ಹೊಳೆಹದ್ದು, ಉಪಾಧ್ಯಕ್ಷ ಶರತ್ ಕೆ. ಆರ್ ಮತ್ತು ಇತರರು ಉಪಸ್ಥಿತರಿದ್ದರು.
ಜಾಹೀರಾತು/Advertisment
0 Comments