Facebook

header logo

ಶಿವಮೊಗ್ಗ ಡಬಲ್ ಮರ್ಡರ್ ಕೇಸ್: ಕೊಪ್ಪಕ್ಕೆ ಚಿಕಿತ್ಸೆಗೆ ಬಂದಿದ್ದ ಓರ್ವ ಆರೆಸ್ಟ್


ಜಾಹೀರಾತು/Advertisment

ಜಾಹೀರಾತು/Advertisment

ಜಾಹೀರಾತು/Advertisment
ಕೊಪ್ಪ: ಶಿವಮೊಗ್ಗದಲ್ಲಿ ಬುಧವಾರ ನಡೆದ ಡಬಲ್ ಮರ್ಡರ್ ಕೇಸ್ ಸಂಬಂಧಿಸಿದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಶಿವಮೊಗ್ಗದಿಂದ ಖಾಸಗಿ‌ ಅಂಬುಲೆನ್ಸ್ ಹಾಗೂ ಇನೋವಾ ವಾಹನದಲ್ಲಿ ಸುಮಾರು ಏಳೆಂಟು ಜನರು ಕೊಪ್ಪಕ್ಕೆ ಬಂದಿದ್ದರು. ಓರ್ವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖಚಿತ‌ ಮಾಹಿತಿ ಆಧರಿಸಿಸ ಕೊಪ್ಪ ಪೊಲೀಸರು ಹಾಗೂ ತೀರ್ಥಹಳ್ಳಿಯ ಪೊಲೀಸರು ಮೂಲಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆದಿಲ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಹಾಗೂ ಕೊಪ್ಪದಲ್ಲಿ ಕಾಣಿಕೊಂಡಿದ್ದ ಶಿವಮೊಗ್ಗ ಮೂಲದವರು ಡಬಲ್ ಮರ್ಡರ್ ಕೇಸ್ ನಲ್ಲಿ ಕೊಲೆಯಾದವರ ಕಡೆಯವರು‌‌ ಎಂದು ತಿಳಿದು ಬಂದಿದೆ.

ಜಾಹೀರಾತು/Advertisment

Post a Comment

0 Comments