ಚಿಕ್ಕಮಗಳೂರು: ಚುನಾವಣಾ ಹಿನ್ನೆಲೆ ಶಾಂತಿ ಕದಡದಂತೆ ಬಜರಂಗದಳ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಅವರನ್ನು ಜಿಲ್ಲಾಡಳಿತ ಗಡಿಪಾರು ಮಾಡಿ ಆಜ್ಞೆ ಹೊರಡಿಸಿತ್ತು. ಆದರೆ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಹಣದ ಆಮಿಷ, ಅಶಾಂತಿ ವಾತಾವರಣ ಸೃಷ್ಟಿ ಸೇರಿದಂತೆ ಸುಮಾರು 17 ಕಾರಣಗಳನ್ನು ಒಡ್ಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ 2 ತಿಂಗಳುಗಳ ಕಾಲ ಗಡಿಪಾರು ಆದೇಶ ಹೊರಡಿಸಿದ್ದರು.
ಈ ಪ್ರಕರಣ ಸಂಬಂಧ ಹೈಕೋರ್ಟ್ ಗಡಿಪಾರು ಮಾಡದಂತೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಜಾಹೀರಾತು/Advertisment
0 Comments