ತರೀಕೆರೆ: ಜಯಪುರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕ ಮಹೇಶ್ ವಿ ಮದುವೆ ನಿಶ್ಚಯವಾದರೂ ತರೀಕೆರೆಯಲ್ಲಿ ಕೆಲಸಕ್ಕೆ ಹಾಜರಾಗಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಮಹೇಶ್ ಮದುವೆ ಏಪ್ರಿಲ್ 28ಕ್ಕೆ ನಿಶ್ಚಯವಾಗಿದೆ. ಮದುವೆ ಕಾರ್ಯಕ್ರಮವಿದ್ದರೂ ಸಹ ಇಲಾಖೆಯ ಮೇಲೆ ಗೌರವ ಮತ್ತು ಪ್ರಾಮಾಣಿಕತೆಯಿಂದಾಗಿ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರ ಕರ್ತವ್ಯ ನಿಷ್ಠೆಗೆ ಸಮದೇಷ್ಠರು ಮತ್ತು ಗೃಹರಕ್ಷಕ ಇಲಾಖೆಯ ಘಟಕಕಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಧನ್ಯವಾದ ತಿಳಿಸಿದ್ದಾರೆ.
ಸಣ್ಣಪುಟ್ಟ ಕಾರಣಗಳನ್ನು ನೀಡಿ ಗೈರುಹಾಜಾರಾಗುವವರ ನಡುವೆ ಇವರು ಮಾದರಿಯಾಗಿದ್ದಾರೆ. ಇವರ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ಮುಂಚಿತವಾಗಿ ಎಂದು ಸಮದೇಷ್ಠರು ಮತ್ತು ಇಲಾಖೆಯ ಸಿಬ್ಬಂದಿಗಳು ಮತ್ತು ಪಿಎಲ್ ಸಿ ಹಾಗೂ ಘಟಕಾಧಿಕಾರಿಗಳು ಶುಭಾಶಯ ತಿಳಿಸಿದ್ದಾರೆ.
ಜಾಹೀರಾತು/Advertisment
0 Comments