Facebook

header logo

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ವಿರುದ್ಧ ಕಿಡಿ ! ಕೊಪ್ಪ ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ವಿರೋಧ


ಜಾಹೀರಾತು/Advertisment

ಜಾಹೀರಾತು/Advertisment

ಕೊಪ್ಪ: ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಜಿಲ್ಲಾಧ್ಯಕ್ಷರ ನಡುವೆ ಮನಸ್ತಾಪ ಹೆಚ್ಚಿದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಅವರ ವಿರುದ್ದ ಅಸಮಾಧಾನ ಹೊರಹಾಕಲು ಸಭೆ ನಡೆಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿರುದ್ಧ ಸಿಡಿದೆದ್ದಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ಸಭೆಯಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ. ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಯಾವ ಕಾರ್ಯಕರ್ತರ ಅಭಿಪ್ರಾಯವನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ. 

ಕಾಂಗ್ರೆಸ್ ಪಕ್ಷ ಬಡವರ ಮಕ್ಕಳ ಬೆವರು ಶ್ರಮದಿಂದ ಶ್ರೀಮಂತರ ಮಕ್ಕಳು ಅಧಿಕಾರ ವಹಿಸಿಕೊಳ್ಳುವುದು ಬೇಡ. ಕಾರ್ಯಕರ್ತರ ಅಭಿಪ್ರಾಯ ಕೇಳದ ಜಿಲ್ಲಾಧ್ಯಕ್ಷರು ನಮಗೆ ಬೇಕಾ? ಇವರ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ಆಘಾತಕಾರಿ ಎಂದಿದ್ದಾರೆ.

 ರವೀಂದ್ರ ಕುಕ್ಕೋಡಿಗೆ, ಮಂಜುನಾಥ್  ನುಗ್ಗಿ,ನವೀನ್ ಮಾವಿನಕಟ್ಟೆ, ಸುಧೀರ್ ಕುಮಾರ್ ಮುರೋಳ್ಳಿ,ರಾಜೇಂದ್ರ ಧರೇಕೊಪ್ಪ, ನವೀನ್ ಕರುವಾನೆ, ಶ್ರೀಹರ್ಷ ಹರಿಹರಪುರ, ಮಿತ್ರ ಕೋಡ್ತಾಳ್, ಅಶೋಕ್ ನಾರ್ವೆ, ರತ್ನಾಕರ್ ಒಣತೋಟ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ  ಸೇರಿಸಿದ್ದಾರೆ.



ಜಾಹೀರಾತು/Advertisment

Post a Comment

0 Comments