ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಆರಂಭವಾದ ಮೊದಲ ದಿನವೇ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಕಾರ್ಯಕರ್ತರಿಂದ ಅಸಮಾಧಾನ ಎದುರಿಸಿದ್ದಾರೆ.
ನಗರದ ಆದ್ರಿಕಾ ಹೊಟೇಲ್ ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಈ ವೇಳೆ ಸಭೆಯಲ್ಲಿ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಮುನಿಸಿಕೊಂಡಿದ್ದಾರೆ. ವೇದಿಕೆ ತೊರೆದು ಕಾರ್ಯಕರ್ತರ ನಡುವೆ ಕುಳಿತಿದ್ದಾರೆ.
ಸಚಿವ ಕೆ.ಜೆ. ಜಾರ್ಜ್ ಮತ್ತು ಶಾಸಕರಾದ ಹೆಚ್.ಡಿ.ತಮ್ಮಯ್ಯ ಕರೆದರೂ ಗಾಯತ್ರಿ ಶಾಂತೇಗೌಡ ವೇದಿಕೆಗೆ ಬರಲಿಲ್ಲ. ಕೊನೆಗೆ ವೇದಿಕೆ ಬಿಟ್ಟು ಸಚಿವರೆ ತೆರಳಿ ಮಾಜಿ ಶಾಸಕಿಯನ್ನು ಕರೆತಂದಿದ್ದಾರೆ.
ಜಾಹೀರಾತು/Advertisment
0 Comments