ಚಿಕ್ಕಮಗಳೂರು: ಏಪ್ರಿಲ್ 26ರಂದು ಲೋಕಸಭಾ ಹಿನ್ನೆಲೆ ಹೋಮ್ ಸ್ಟೇ ಮತ್ತು ರೆಸಾರ್ಟ್ ರೂಮ್ ಬುಕಿಂಗ್ ನೀಡದಂತೆ ಮಾಲಿಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಗದೆ ಇರಬಾರದು. ರಜೆ ಇರುವ ಕಾರಣ ಜಿಲ್ಲೆಗೆ ಮತದಾನ ಬಿಟ್ಟು ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ ಏಪ್ರಿಲ್ 25, 26 ರಂದು ರೂಂ ಬುಕ್ಕಿಂಗ್ ನೀಡದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ
ಅತಿ ಹೆಚ್ಚು ಮತದಾನ ನಡೆಸುವ ಉದ್ದೇಶದಿಂದ ಹೋಮ್ ಸ್ಟೇ ಮತ್ತು ರೆಸಾರ್ಟ್ ಮಾಲೀಕರಿಗೆ ಯಾವುದೇ ಬುಕಿಂಗ್ ಮಾಡಬಾರದೆಂದು ಲಿಖಿತವಾಗಿ ಮನವಿ ಮಾಡಿದ್ದಾರೆ.
ಜಾಹೀರಾತು/Advertisment
0 Comments