Facebook

header logo

ಸಿಡಿಲು ಬಡಿದು ಹತ್ತಿ ಉರಿದ ತೆಂಗಿನ ಮರ!


ಜಾಹೀರಾತು/Advertisment

ಜಾಹೀರಾತು/Advertisment
ಎನ್.ಆರ್.ಪುರ: ಬಿಸಿಲಿನ ಧಗೆಗೆ ತಾಲೂಕಿನ ಹಲವೆಡೆ ವರುಣ ತಂಪೆರೆಯುತ್ತಿದ್ದಾನೆ. ಗುಡುಗು- ಸಿಡಿಲಿನ ಆರ್ಭಟ ಕೂಡಾ ಜೋರಾಗಿಯೇ ಇದೆ. ಬಾಳೆಹೊನ್ನುರು-ಕೊಪ್ಪ ರಸ್ತೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಹತ್ತಿ ಉರಿದಿದೆ.

ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಕೂಡಲೇ ಸಂಪೂರ್ಣ ಮರ ಬೆಂಕಿಗಾಹುತಿ ಆಗಿದೆ. ಈ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಕಳೆದ ರಾತ್ರಿ ಬಾಳೆಹೊನ್ನೂರು ಸುತ್ತಮುತ್ತಾ ಗಾಳಿ-ಮಳೆ ಆಗಿದೆ. ಸಿಡಿಲಿನ ಅಬ್ಬರ ಕೂಡಾ ಇತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಜಾಹೀರಾತು/Advertisment

Post a Comment

0 Comments