ಮೂಡಿಗೆರೆ: ಮಳೆಯಿಂದ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹಸು ಸಾವನ್ನಪ್ಪಿರುವ ಘಟನೆ ಕೊಟ್ಟಿಗೆಹಾರ ಸಮೀಪ ಬಿ ಹೊಸಲ್ಲಿಯಲ್ಲಿ ನಡೆದಿದೆ.
ಭಾನುವಾರ ಸುರಿದ ಭಾರೀ ಮಳೆಯಿಂದ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿತ್ತು. ಕಾರಣ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿತ್ತು. ಗಣಪ ಎಂಬುವವರಿಗೆ ಸೇರಿದ ಹಸುವೊಂದು ಅದನ್ನು ತುಳಿದಿದೆ. ಕೂಡಲೇ ಹಸು ಸಾವನ್ನಪ್ಪಿದೆ.
ಜನ ಸಂಚರಿಸುವ ರಸ್ತೆ ಇದಾಗಿದ್ದು, ಅದೃಷ್ಟವೆಂಬತೆ ಅಂದು ಯಾರೂ ಹೋಗಿರದ ಕಾರಣ ಅನಾಹುತ ತಪ್ಪಿದೆ. ಆದರೆ ಹಸು ಸಾವನ್ನಪ್ಪಿರುವುದು ದುರಂತವೇ ಸರಿ.
ಜಾಹೀರಾತು/Advertisment
0 Comments