Facebook

header logo

ಬೆಟ್ಟಗೆರೆಯಲ್ಲಿ ಸಿಡಿಲು ಬಡಿದು ವ್ಯಕ್ತಿಗೆ ಗಂಭೀರ ಗಾಯ


ಜಾಹೀರಾತು/Advertisment

ಜಾಹೀರಾತು/Advertisment
ಕೊಟ್ಟಿಗೆಹಾರ: ಕಳೆದ ಗುರುವಾರ ಬೆಟ್ಟಗೆರೆಯಲ್ಲಿ  ಸಿಡಿಲು ಬಡಿದು ವ್ಯಕ್ತಿಯೋರ್ವರು ಗಂಭೀರ ಗಾಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.                     

 ಬೆಟ್ಟಗೆರೆಯ ಗದ್ಗೋಡು ಗ್ರಾಮದ ಲಕ್ಷ್ಮಣ ಶೆಟ್ಟಿ  ಗಂಭೀರ ಗಾಯಗೊಂಡಿರುವ ವ್ಯಕ್ತಿ. ಮಂಗಳವಾರ ರಾತ್ರಿ 8.30 ಸಮಯದಲ್ಲಿ ಮನೆಗೆ ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ  ಲಕ್ಷ್ಮಣ ಅವರ ಕಾಲು ಹಾಗೂ ಕಿಡ್ನಿ ವೈಪಲ್ಯವಾಗಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ  ದರ್ಶನ್ ತಿಳಿಸಿದ್ದಾರೆ.ಇವರು ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು.ಸಿಡಿಲು ಬಡಿಯುವಾಗ ಲಕ್ಷ್ಮಣ್ ಪತ್ನಿ ಕೂಡ ಮನೆಯಲಿದ್ದರು.ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. 

 *ಅಧಿಕಾರಿಗಳ ಭೇಟಿ* : ಸಿಡಿಲು ಬಡಿದಿರುವ ಗದ್ಗೋಡು ಗ್ರಾಮದ ಲಕ್ಷ್ಮಣ ಅವರ ಮನೆಗೆ ಗ್ರಾಮದ ಲೆಕ್ಕಾಧಿಕಾರಿ ಉಮೇಶ್, ಪಿಡಿಓ ದರ್ಶನ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.ಗಾಯಾಳುಗೆ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಜಾಹೀರಾತು/Advertisment

Post a Comment

0 Comments